ಆಗುವುದೆಲ್ಲಾ ಒಳ್ಳೆದಕ್ಕೆ

ಇದು ನನ್ನ ಅಮ್ಮ ನನಗೆ ಚಿಕ್ಕವನಿದ್ದಾಗ ಹೇಳಿರೋ ಕತೆ, ನನಗೆ ಬೇಜಾರಾದಾಗೆಲ್ಲ ಈ ಕಥೆನಾ ನೆನೆಪು ಮಾಡಿಕೊಂಡು ಮೂಡ್ change ಮಾಡ್ಕೋತೀನಿ, ಒಂದು ರಾಜ್ಯ ಅಂಚಿನಲ್ಲಿ ಇರೋ ಊರ ಜನರು ರಾಜನ ಹತ್ರ ಬಂದು ತಮಗೆ ಕಾಡು ಪ್ರಾಣಿಗಳಿಂದ ತುಂಬ ತೊಂದರೆ ಆಗುತ್ತಿದೆ ಕಾಡಲ್ಲಿ ಪ್ರಾಣಿಗಳು ಜಾಸ್ತಿ ಆಗಿವೆ ಅದಕ್ಕೆ ಏನಾದ್ರೂ ಪರಿಹಾರ ಕೊಡಿ ಅಂತ ಕೇಳ್ತಾರೆ, ರಾಜನು ಮಂತ್ರಿ ಸಲಹೆ ಕೇಳುತ್ತಾನೆ, ಮಂತ್ರಿ ಯಾವಾಗಲೂ ಎಲ್ಲದಕ್ಕೂ ಒಳ್ಳೇದು ಆಗತ್ತೆ ಅಂತ ಹೇಳ್ತಾ ಇರುತ್ತಾನೆ ಈಗಲೂ ಹಾಗೆ ಹೇಳುತ್ತಾನೆ ಅದಕ್ಕೆ ರಾಜ ಮಂತ್ರಿನಾ ಉಗಿತಾನೆ ಏನು ಒಳ್ಳೇದು ಆಗತ್ತೆ ಅಂತ, ಮಂತ್ರಿ ಬೇಟೆ ಹೋಗಿ ಸ್ವಲ್ಪ ಪ್ರಾಣಿಗಳನ್ನು ಕೊಂದರೆ ಒಳ್ಳೇದು ಆಗತ್ತೆ ಅಂತಾನೆ, ಅದಕ್ಕೆ ರಾಜ ಬೇಟೆಗೆ ಹೋಗಲು ಸಿದ್ಧವಾಗುತ್ತಾನೆ. ಮರುದಿನ ಬೇಟೆಗೆ ಹೋಗಲು ತಯಾರಿ ಮಾಡುತ್ತಾರೆ ಅಂದ್ರೆ ಸೈನಿಕರು ರಾಜ ಮಂತ್ರಿ ಎಲ್ಲರೂ ಪೂಜೆ ಮಾಡಿ ಬೇಟೆಗೆ ಹೊರಡುತ್ತಾರೆ, ಸುರವಾತಿನಲ್ಲಿ ಪ್ರಾಣಿಗಳು ಸಿಗುವುದಿಲ್ಲ, ಅದಕ್ಕೆ ದಟ್ಟ ಕಾಡಿನ ಒಳಗೆ ಹೋಗತ್ತಾರೆ .ರಾಜ ಮತ್ತು ಮಂತ್ರಿ ಬೇಟೆ ಆಡು ಬರದಲ್ಲಿ ಸೈನಿಕರನ್ನೂ ಹಿಂದೆ ಬಿಟ್ಟು ಮುಂದೆ ಹೋಗುತ್ತಾರೆ. ಹಾಗೆ ಬೇಟೆಯನ್ನು ಬೆನ್ನತ್ತಿ ಹೋಗುವಾಗ ನೆಲದ ಮೇಲೆ ಇರೋ ಮರದ ಬೇರಿಗೆ ರಾಜ ಎಡೆದು ಬೀಳುತ್ತಾನೆ ಹಾಗೆ ಹೆಬ್ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಇದನ್ನ ನೋಡಿ ಅವನ ಹಿಂದೆ ಮಂತ್ರಿ ಅವನ ಯಾವಾಗಲೂ ಹೇಳೋ ಆಗೋದೆಲ್ಲ ಒಳ್ಳೆಯದಕ್ಕೂ ಅಂತ ಹೇಳ್ತಾನೆ. ಮಂತ್ರಿ ಮಾತನ್ನ ಕೇಳಿ ರಾಜನಿಗೆ ಮಂತ್ರಿಯನ್ನು ಖಡ್ಗದಿಂದ ಸೀಳಿ ಹಾಕುವಷ್ಟು ಸಿಟ್ಟು ಬರತ್ತೆ ಆದ್ರೂ ತನ್ನ ಸಿಟ್ಟನ್ನು ತಡೆದು ಮಂತ್ರಿಯನ್ನು ಕೇಳುತ್ತಾನೆ ‘ನಾನು ಬಿದ್ರು ಹೇಗೆ ಒಳ್ಳೇದು ಆಗತ್ತೆ ಅಂತ ಮಂತ್ರಿಯನ್ನು ಕೇಳುತ್ತಾನೆ’ ಅದಕ್ಕೆ ಮಂತ್ರಿ ಆಗೋದೆಲ್ಲ ಒಳ್ಳೆದಕ್ಕೆ ಅಂತ ಹೇಳ್ತಾನೆ ಹೊರೆತು ರಾಜನಿಗೆ ಸರಿಯದ ಉತ್ತರ ಕೊಡುವುದಿಲ್ಲ. ರಾಜನು ಮನಸಲ್ಲೇ ಇವನಿಗೆ ಸರಿಯಾದ ಬುದ್ಧಿ ಕಲಿಸಬೇಕು ಮನಸ್ಸೊಳಗೆ ಅಂದುಕೊಳ್ಳುತ್ತಿರುತ್ತಾನೆ. ಹಾಗೆ ಸ್ವಲ್ಪ ಹೊತ್ತು ಮುಂದೆ ಸಾಗುತ್ತಿದ್ದಾಗ ರಾಜನಿಗೆ ಒಂದು ಹಾಳು ಬಾವಿ ಕಾಣಿಸತ್ತೆ. ರಾಜ ‘ ಮಂತ್ರಿಗಳೇ ನೀವು ರಾಜನ ಎಲ್ಲ ಮಾತುಗಳನ್ನು ಪಾಲಿಸುವುದು ನಿಮ್ಮ ಕರ್ತವ್ಯ ಅಲ್ಲವೇ ಅಂತ ಕೇಳುತ್ತಾನೆ ‘ ಅದಕ್ಕೆ ಮಂತ್ರಿ ಹೌದು ರಾಜರೆ ಹೇಳಿ ನಿಮ್ಮ ಆದೇಶ ಏನು ಕೇಳುತ್ತಾನೆ. ಅದಕ್ಕೆ ರಾಜ ಮುಂದೆ ಇರೋ ಹಾಳು ಬಾವಿಯಲ್ಲಿ ಬೀಳಲೂ ಹೇಳುತ್ತಾನೆ ಒಂದು ವೇಳೆ ರಾಜ ಧರ್ಮ ಪಾಲನೆ ಮಾಡದೆ ಇದ್ರೆ ನಿಮ್ಮನ್ನು ಖಡ್ಗದಿಂದ ಸೀಳುವೆ ಅಂತ ಎಚ್ಚರಿಕೆ ಕೊಡುತ್ತಾನೆ. ಅದಕ್ಕೆ ಮಂತ್ರಿ ” ಆಗೋದೆಲ್ಲ ಒಳ್ಳೇದಕ್ಕೆ” ಅಂತ ಆ ಬಾವಿಯಲ್ಲಿ ಜಿಗಿಯುತ್ತಾನೆ. ರಾಜ ಬಾವಿಯಲ್ಲಿ ಇರೋ ಮಂತ್ರಿಯನ್ನು ಕೆಣಕಿ ಆಗೋದೆಲ್ಲ ಒಳ್ಳೇದಕ್ಕೆ ಅಂತ ಹೇಳಿದೆ ಅಲ್ವಾ ಈಗ ಇಲ್ಲೆ ಬಿದ್ದು ಸಾಯಿರಿ ಅಂತ ಹೇಳಿ ಸೈನಿಕರನ್ನೂ ಹುಡುಕಲು ಹೊರಡುತ್ತಾನೆ. ಬಂದ ದಿಕ್ಕಿನ ಕಡೆ ಹೋಗುತ್ತಿರುವಾಗ ಒಮ್ಮೆಲೇ ಅವನ ಮೇಲೆ ಆಕ್ರಮಣ ಆಗತ್ತೆ ಅವನು ಯಾರು ಆಕ್ರಮಣ ಮಾಡಿದರೆ ಅನ್ನೋದನ್ನ ತಿಳಿವ ಮೊದಲೇ ಬಂದಿ ಆಗಿಬಿಡುತ್ತಾನೆ. ಅವನನ್ನು ಮನುಷ್ಯರನ್ನು ತಿನ್ನುವ ನರಭಕ್ಷಕರು ಬಂದಿಸುತ್ತಾರೆ. ರಾಜನಿಗೆ ತನ್ನ ಪರಿಸ್ಥಿತಿ ಅರಿವಾಗುತ್ತದೆ ಒಂದು ವೇಳೆ ಮಂತ್ರಿ ಇದ್ದಿದ್ದರೆ ಸ್ವಲ್ಪ ಹೊತ್ತು ಹೋರಾಟ ಮಾಡಬಹುದಿತ್ತು ಅಂತ ಆದ್ರೆ ಇಷ್ಟು ನರಭಕ್ಷಕರು ಇರುವಾಗ ಎಲ್ಲವ ವ್ಯರ್ಥ ಆಗೋದು ಅಂತ ತಿಳೀತನೆ. ನರಭಕ್ಷಕರು ಅವನನ್ನೂ ಬಲಿ ಕೊಡಲು ತಮ್ಮ ವಾಸ ಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ತಮ್ಮ ಎಲ್ಲ ಪೂಜೆಗಳನ್ನು ಪೂರ್ತಿ ಮಾಡಿ ಬಲಿಪೀಠದಲ್ಲಿ ಅವನ ತಲೆಯನ್ನು ಇಡುತ್ತಾರೆ, ಬಲಿ ಕೊಡೋ ಕುಡುಕ ತನ್ನ ಕತ್ತಿ ಎತ್ತಿ ಇನ್ನೇನು ತಲೆ ಕಡಿಬೇಕು ಅನ್ನುವಷ್ಟರಲ್ಲಿ ರಾಜನ ಹೆಬ್ಬೆರಳಿಗೆ ಆಗಿರೋ ಗಾಯ ನೋಡುತ್ತಾನೆ, ನೋಡಿ ಸಿಟ್ಟಿಲ್ಲಿ ತನ್ನ ಕತ್ತಿಯನ್ನು ಬಿಸಾಕುತ್ತಾನೆ, ರಾಜನಿಗೂ ಮತ್ತು ಅಲ್ಲಿರುವ ನರಭಕ್ಷಕರಿಗು ಇವನು ಏನು ಮಾಡುತ್ತಿರುವನು ಅನ್ನೋದೆ ಅರ್ಥ ಆಗಲ್ಲ. ಕಟುಕ ಈ ಬಲಿ ಅಪವಿತ್ರವಾಗಿದೆ ಬಲಿ ಕೊಟ್ಟರೆ ದೇವಿ ಸಿಟ್ಟಗುತ್ತಾಳೆ ಅಂತ ರಾಜನ ಹೆಬ್ಬೆರಳಿಗೆ ಆಗಿರೋ ಗಾಯ ತೋರಿಸುತ್ತಾನೆ. ಅದನ್ನ ನೋಡಿ ನರಭಕ್ಷಕರು ತಮ್ಮ ತಮ್ಮಲ್ಲೇ ಒಳ್ಳೆ ಬಲಿ ಕೈತಪ್ಪಿ ಹೋಯಿತು ಅಂತ ಬೇಜಾರು ಮಾಡಿಕೊಂಡು ರಾಜನನ್ನು ಬಿಟ್ಟು ಕಳಿಸುತ್ತಾರೆ. ರಾಜನಿಗೆ ಒಂದು ಕ್ಷಣ ರೋಮಾಂಚನವಾಗುತ್ತದೆ, ಮಂತ್ರಿ ಯಾವಾಗಲೂ ಹೇಳೋ ಮಾತು ನೆನಪಿಗೆ ಬರುತ್ತದೆ ” ಆಗುವುದೆಲ್ಲ ಒಳ್ಳೆದಕ್ಕೆ” . ರಾಜ ತನ್ನ ತಪ್ಪಿನ ಅರಿವಾಗಿ ಮಂತ್ರಿಯನ್ನು ಮೇಲೆ ಎತ್ತಲು ಬಾವಿ ಹತ್ತಿರ ಓಡೋಡಿ ಬರುತ್ತಾನೆ. ಮಂತ್ರಿಗಳೇ ನೀವು ಮಾತು ನಿಜ ಆಗೋದೆಲ್ಲ ಒಳ್ಳೆದಕ್ಕೆ ಅಂತ ರಾಜ ಹೇಳುತ್ತಾನೆ ಅದನ್ನ ಕೇಳಿದ ಮಂತ್ರಿಗೆ ರಾಜ ಮಾತು ಅರ್ಥ ಆಗುವುದಿಲ್ಲ. ರಾಜ ಮಂತ್ರಿಯನ್ನು ಮೇಲೆ ಎತ್ತಲು ಅಲ್ಲಿರೋ ಆಲದ ಮರ ಬೇರುಗಳನ್ನು ಸುರಳಿ ಮಾಡಿ ಪ್ರಯತ್ನ ಪಡುತ್ತಿರುತ್ತಾನೆ ಅಷ್ಟರಲ್ಲೇ ಸೈನಿಕರು ಇವರನ್ನು ಹುಡುಕುತ್ತ ಇವರು ಇರುವಲ್ಲಿಗೆ ಬರುತ್ತಾರೆ. ಸೈನಿಕರು ಸಹಾಯದಿಂದ ಮಂತ್ರಿಯನ್ನು ಮೇಲೆ ಎತ್ತುತ್ತಾರೆ. ರಾಜನು ನಡೆದಿರೋ ಎಲ್ಲ ಘಟನೆಗಳನ್ನು ಬಗ್ಗೆ ಮಂತ್ರಿ ಹೇಳಿ ಮಂತ್ರಿಯನ್ನು ಕಣ್ಣೀರು ಹಾಕುತ್ತಾ ಅಪ್ಪಿಕೊಳ್ಳುತ್ತಾನೆ, ನೀವು ಯಾಕೆ ಯಾವಾಗಲೂ ಆಗೋದೆಲ್ಲ ಒಳ್ಳೆದಕ್ಕೆ ಅಂತ ಹೇಳುತ್ತಿದೀರಿ ಅದರ ಮಹತ್ವ ಏನು ಇವತ್ತು ತಿಳಿಯಿತು ಅನ್ನುತ್ತಾನೆ. ಅವಾಗ ಮಂತ್ರಿಗಳು ರಾಜನ ಕಾಲಿಗೆ ಬಿದ್ದು ರಾಜರೆ ನೀವು ನನ್ನ ಬಾವಿಗೆ ತಳ್ಳಿದ್ದು ಒಳ್ಳೆದಕ್ಕೆ ಅಂತ ಹೇಳುತ್ತಾನೆ. ಅದನ್ನ ಕೇಳಿದ ರಾಜನಿಗೆ ಆಶ್ಚರ್ಯ ಆಗುತ್ತದೆ ಆಗ ಮಂತ್ರಿಗಳು ” ರಾಜರೆ ನೀವು ಒಂದು ವೇಳೆ ನನ್ನನ್ನು ಬಾವಿಗೆ ತಳ್ಳದೆ ಹೋಗಿದ್ದಿದ್ದರೆ ಆ ನರಭಕ್ಷಕರು ಈ ನಿಮ್ಮ ಮಂತ್ರಿಯನ್ನು ಬಲಿ ಕೊಟ್ಟು ಆಹಾರ ಮಾಡಿಕೊಳ್ಳುತ್ತಿದರೆ ಅಂತ ಹೇಳುತ್ತಾನೆ”, ಅದನ್ನ ಕೇಳಿದೆ ರಾಜನಿಗೆ ಮೊದಲು ಶಾಕ್ ಆಗಿ ಆಮೇಲೆ ಸರಿಯಾಗಿ ಅರ್ಥ ಆಗುತ್ತದೆ, ಅವನು ಮಂತ್ರಿಯನ್ನು ಎಬ್ಬಿಸಿ ಅಪ್ಪಿಕೊಳ್ಳುತ್ತ ” ಆಗುವುದೆಲ್ಲ ಒಳ್ಳೆದಕ್ಕೆ” ಹೇಳುತ್ತಾನೆ. ನಮ್ಮ ಜೀವನವೂ ಹೀಗೆ ಅಲ್ಲವೇ ಎಲ್ಲವೂ ಆಗೋದಕ್ಕೆ ಒಂದು ಒಳ್ಳೆ ಕಾರಣ ಇದ್ದೇ ಇರತ್ತೆ. ನಾವು ಆ ಕಾರಣ ಏನು ಅನೋದನ್ನ ತಿಳಿಯೋದನ್ನು ಕಲಿಬೇಕು

ನಿಮ್ಮ ಟಿಪ್ಪಣಿ ಬರೆಯಿರಿ